ಕರ್ನಾಟಕದ ರಾಜ್ಯಪಾಲೆ ಆಗಬೇಕಿದ್ದ BSY ಅಪ್ತೆಯನ್ನು ತೆಲಂಗಾಣದ ರಾಜ್ಯಪಾಲೆಯನ್ನಾಗಿ ಘೋಷಿಸಿದ ಕೋವಿಂದ್, ಕರ್ನಾಟಕದ ದಿಟ್ಟ ಮಹಿಳೆ ತೆಲಂಗಾಣದ ನೂತನ ರಾಜ್ಯಪಾಲೆ


ತೆಲಂಗಾಣದ ನೂತನ ರಾಜ್ಯಪಾಲೆಯಾಗಿ ಡಾ. ತಮಿಳಿಸೈ ಸೌಂದರರಾಜನ್ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.

ಸೌಂದರರಾಜನ್ ಅವರಿಗೆ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಪ್ರತಿಜ್ಞಾವಿಧಿ ಬೋಧಿಸಿದರು.

ಬಿಜೆಪಿಯ  ಘಟಕದ ಅಧ್ಯಕ್ಷೆಯಾಗಿದ್ದ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್  ತೆಲಂಗಾಣದ ರಾಜ್ಯಪಾಲೆಯನ್ನಾಗಿ ಘೋಷಿಸಿದ್ದರು. ಜತೆಗೆ ಹಿಮಾಚಲ ಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ರಾಜಸ್ತಾನಕ್ಕೂ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದರು.

Comments