ಸ್ಪೋಕಟ ಬ್ರೇಕಿಂಗ್ !! ಇನ್ನೂ ಮುಂದೆ ಬಿಜೆಪಿಗೂ ಸಿದ್ದರಾಮಯ್ಯನೇ ಹೈಕಮಾಂಡ್​ ?!


ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲು ಸಜ್ಜಾಗಿದ್ದ ಮಾಜಿ ಸಚಿವ ವಿಶ್ವನಾಥ್​ಗೆ ಹಿನ್ನಡೆಯಾಗಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಅವರು ಆರೋಪಿಸಿದ್ದಾರೆ.

ತನಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್​.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಹೆಸರನ್ನು ತಳುಕು ಹಾಕಿರುವ ವಿಶ್ವನಾಥ್, ಪಕ್ಷದ ಒಳಗಡೆ ಹಾಗೂ ಹೊರಗಡೆ ಪಿತೂರಿ ನಡೆದಿದೆ. ಇದನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸುವೆ ಎಂದು ಕಿಡಿಕಾರಿದ್ದಾರೆ. ಈ ಆರೋಪ ಅಲ್ಲಗೆಳೆದಿರುವ ಸಿದ್ದರಾಮಯ್ಯ, 'ಹಾಗಾದರೆ ಅವನ ಪ್ರಕಾರ ಬಿಜೆಪಿಗೂ ನಾನೇ ಹೈಕಮಾಂಡ್​?' ಎಂದು ಲೇವಡಿ ಮಾಡಿದ್ದಾರೆ. 

'ಎಂಎಲ್​ಸಿ ಚುನಾವಣೆಗೆ ಎಚ್​.ವಿಶ್ವನಾಥ್​ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ನಾನೇ ಕಾರಣ ಅನ್ನೋದಾದರೆ ಅವನ ಪ್ರಕಾರ ನಾನು ಬಿಜೆಪಿ ಹೈಕಮಾಂಡ್. ಅವನಿಗೆ ಬುದ್ಧಿ ಇಲ್ಲ…' ಎಂದು ಸಿದ್ದರಾಮಯ್ಯ ಏಕವಚನದಲ್ಲೇ ವಿಶ್ವನಾಥ್​ ಆರೋಪಕ್ಕೆ ಕಿಡಿಕಾರಿದರು.

Comments